ಬುಧು ಭಗತ್ ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ. ಬುಧು ಭಗತ್ ಅವರು ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧದ ನೇತೃತ್ವ ವಹಿಸಿದ್ದರು. ಅವರು ೧೮೩೧- ೩೧ ರಲ್ಲಿ ಛೋಟಾನಾಗ್‌ಪುರದಲ್ಲಿ ಕೋಲ್ ದಂಗೆ ಮತ್ತು ಲಾರ್ಕಾ ದಂಗೆಯ ನಾಯಕರಾಗಿದ್ದರು. == ಜೀವನಚರಿತ್ರೆ == ಬುಧು ಭಗತ್ ಅವರು ಓರಾನ್ ರೈತ ಕುಟುಂಬದಲ್ಲಿ ೧೭೯೨ ಫೆಬ್ರವರಿ ೧೭ ರಂದು ಬ್ರಿಟಿಷ್ ಭಾರತದಲ್ಲಿ ರಾಂಚಿ ಜಿಲ್ಲೆಯ ಚಾನ್ಹೋ ಬ್ಲಾಕ್ನ ಸಿಲಗೈ ಗ್ರಾಮದಲ್ಲಿ ಜನಿಸಿದರು. == ಬಂಡಾಯ == ೧೮೩೧ ರಲ್ಲಿ, ಬುಧು ಭಗತ್ ಸಿಂಗ್ಭೂಮ್ನಲ್ಲಿ ಬ್ರಿಟಿಷರ ವಿರುದ್ಧ ಕೋಲ್ ದಂಗೆಯನ್ನು ಮುನ್ನಡೆಸಿದರು. ಅವರು ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧದ ನೇತೃತ್ವ ವಹಿಸಿದ್ದರು. ಈ ದಂಗೆಯ ಪ್ರಭಾವವು ಅಗಾಧವಾಗಿತ್ತು ಮತ್ತು ನಂತರ ಅದು ರಾಂಚಿ, ಹಜಾರಿಬಾಗ್, ಪಲಮು ಮತ್ತು ಮಂಭುಮ್‌ಗೆ ಹರಡಿತು. ೧೮೩೨ ರಲ್ಲಿ, ಬುದ್ಧು ಭಗತ್ ಬ್ರಿಟಿಷರು ಮತ್ತು ಜಮೀನ್‌ದಾರರ ದಬ್ಬಾಳಿಕೆಯ ಆಡಳಿತದ ವಿರುದ್ಧ ಛೋಟಾನಾಗ್‌ಪುರದ ಆದಿವಾಸಿಗಳೊಂದಿಗೆ ದಂಗೆಯನ್ನು ನಡೆಸಿದರು. ಈ ದಂಗೆಯನ್ನು ಲಾಕ್ರಾ ಬಂಡಾಯ ಎಂದು ಕರೆಯಲಾಗುತ್ತದೆ. ಇದರಲ್ಲಿ ಓರಾನ್, ಮುಂಡಾ, ಭೂಮಿಜ್, ಹೋ ಇತ್ಯಾದಿ ಆದಿವಾಸಿಗಳು ಕೊಡುಗೆ ನೀಡಿದ್ದಾರೆ. ಬ್ರಿಟಿಷರು ಬುಧು ಭಗತ್‌ನನ್ನು ಸೆರೆಹಿಡಿದವರಿಗೆ ಬಹುಮಾನ ಘೋಷಿಸಿದರು. ಬ್ರಿಟಿಷ್ ಪಡೆಗಳು ೧೩ ಫೆಬ್ರವರಿ ೧೮೩೨ ರಂದು ಸಿಲಗೈ ಗ್ರಾಮಕ್ಕೆ ಆಗಮಿಸಿದವು ಮತ್ತು ಬುಧು ಭಗತ್‌ನ ಅನುಯಾಯಿಗಳಿಂದ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಯಿತು. ಅವರು ಬಿಲ್ಲು, ಬಾಣಗಳು, ಕೊಡಲಿಗಳು ಮತ್ತು ಕತ್ತಿಗಳಿಂದ ಬ್ರಿಟಿಷ್ ಪಡೆಗಳ ಮೇಲೆ ದಾಳಿ ಮಾಡಿದರು. ಬುಧು ಭಗತ್ ಅವರ ಮಕ್ಕಳಾದ ಹಲ್ಧರ್ ಭಗತ್ ಮತ್ತು ಗಿರಿಧರ್ ಭಗತ್ ಬ್ರಿಟಿಷರಿಂದ ಕೊಲ್ಲಲ್ಪಟ್ಟರು. ಬುಧು ಭಗತ್ ನನ್ನು ಬ್ರಿಟಿಷರು ಸೆರೆಹಿಡಿದು ಕೊಂದರು. == ಉಲ್ಲೇಖಗಳು ==